Categories
devotional Information

ಹೆಂಗಸರು ಅಡುಗೆ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವಾಗ ಅದಕ್ಕಿಂತ ಮೊದಲು ಈ ರೀತಿ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಸಂಪತ್ತು ಐಶ್ವರ್ಯ ತುಂಬಿ ತುಳುಕುತ್ತೆ …!!!

ನಮಸ್ಕಾರ ಸ್ನೇಹಿತರೇ ಒಂದು ಮನೆ ಏಳಿಗೆಯನ್ನು ಹೊಂದಿ ಅಸ್ತಿ ಅಂತಸ್ತು ಹಾಗೂ ಐಶ್ವರ್ಯ ಮನೆಗೆ ಲಭಿಸಬೇಕೆಂದರೆ ಅದಕ್ಕೆ ಹೆಣ್ಣುಮಕ್ಕಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ ..ಹೌದು ಸ್ನೇಹಿತರೇ ಹೆಣ್ಣುಮಕ್ಕಳನ್ನು ಮನೆಯ ಲಕ್ಷ್ಮಿ ಎಂದು ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿರುವ ಹೆಣ್ಣುಮಕ್ಕಳು ಅಡುಗೆ ಮಾಡುವಾಗ ಅಕ್ಕಿಯನ್ನು ತೊಳೆಯುವುದಕ್ಕಿಂತ ಮೊದಲು ಹೆಣ್ಣಮಕ್ಕಳು ಈ ಕೆಲಸಗಳನ್ನು ತಪ್ಪದೇ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದ್ರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಸ್ನೇಹಿತರೆ

ಮನೆಗೆ ಐಶ್ವರ್ಯ ಲಭಿಸಬೇಕು ಅಂದರೆ ಮನೆಗೆ ಒಳ್ಳೆಯ ಶಕ್ತಿಯ ಪ್ರವೇಶ ಆಗಬೇಕು ಅಂದರೆ, ಮನೆಯಲ್ಲಿರುವ ಹೆಣ್ಣು ಮಕ್ಕಳು ಅಡುಗೆ ಮಾಡುವಂತಹ ಸಮಯದಲ್ಲಿ ಅಂದರೆ ಅನ್ನ ಮಾಡುವಂತಹ ಸಮಯದಲ್ಲಿ ಈ ಒಂದು ಕೆಲಸವನ್ನ ಮಾಡಬೇಕು. ಹೌದು ಈ ಒಂದು ಕೆಲಸವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಏನಾದರೂ ಪ್ರತಿದಿನ ಮಾಡುತ್ತ ಬಂದರೆ, ಪ್ರತಿ ದಿನ ಅಂದರೆ ಹನ್ನೊಂದು ದಿನಗಳ ವರೆಗೂ ಈ ಒಂದು ಪರಿಹಾರವನ್ನು ಮಾಡಬೇಕಾಗುತ್ತದೆ. ಈ ಚಿಕ್ಕ ಪರಿಹಾರ ನಿಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಹಾಗಾದರೆ ಆ ಒಂದು ಕೆಲಸ ಯಾವುದು ಹೆಣ್ಣುಮಕ್ಕಳು ಹೇಗೆ ಅದನ್ನು ಕೈಗೊಳ್ಳಬೇಕು ಎಂಬುದರ ಮಾಹಿತಿಯನ್ನು ತಿಳಿಸುತ್ತೇನೆ ಇಂದಿನ ಈ ಲೇಖನದಲ್ಲಿ.

ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಪ್ರತಿದಿನ ಅಡುಗೆ ಮಾಡುವ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡಿ. ಹೌದು ಮನೆಯಲ್ಲಿ ಸಿರಿಧಾನ್ಯಗಳನ್ನು ಅನ್ನಪೂರ್ಣೇಶ್ವರಿಗೆ ಹೋಲಿಸುತ್ತಾರೆ ಅದರಲ್ಲಿಯೂ ಅನ್ನವನ್ನು ಪರಬ್ರಹ್ಮ ಸ್ವರೂಪ ಅಂತ ಕರೀತಾರೆ. ಅನ್ನವನ್ನು ನಾವು ಗೌರವಿಸಬೇಕು ಅನ್ನದಾನ ಮಾಡಿದಷ್ಟು ನಮ್ಮ ಜೀವನದಲ್ಲಿ ಪುಣ್ಯ ಲಭಿಸುತ್ತದೆ. ಆ ಒಂದು ಪುಣ್ಯ ಲಭಿಸಬೇಕಾದರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ನಾವು ಪಡೆದುಕೊಳ್ಳಬೇಕು ಅಂದರೆ ಮನೆಯಲ್ಲಿ ಯಾವಾಗಲೂ ಸಿರಿಧಾನ್ಯಗಳ ಕೊರತೆ ಆಗಬಾರದು ಅಂದರೆ ಈ ಒಂದು ಕೆಲಸವನ್ನು ಮಾಡಬೇಕು.

ಅದೇನೆಂದರೆ ಪ್ರತಿದಿನ ಹೆಣ್ಣುಮಕ್ಕಳು ಅನ್ನವನ್ನು ಮಾಡುವಾಗ ಪತ್ರಿಕೆ ಹಾಕಿಕೊಂಡ ಅಕ್ಕಿಯಲ್ಲಿ ಒಂದು ಹಿಡಿ ಅಕ್ಕಿಯನ್ನು ತೆಗೆದು ಪ್ರತ್ಯೇಕವಾದ ಒಂದು ಚೀಲದಲ್ಲಿ ಹಾಕಿ ಇಡಬೇಕು ಈ ರೀತಿ ಹನ್ನೊಂದು ದಿನಗಳವರೆಗೆ ಪ್ರತಿದಿನ ಮನೆಯಲ್ಲಿ ಅಡುಗೆ ಮಾಡುವಾಗ ಅನ್ನವನ್ನು ಮಾಡುವಾಗ ಆ ಅಕ್ಕಿಯಲ್ಲಿ ಒಂದು ಹಿಡಿ ಅಕ್ಕಿಯನ್ನು ತೆರೆದಿಡುವುದರಿಂದ ನಂತರ ಹನ್ನೊಂದು ದಿನಗಳು ಆದ ಮೇಲೆ ಆ ಚೀಲದಲ್ಲಿ ಇರುವ ಅಕ್ಕಿಯನ್ನು ಯಾರಿಗಾದರೂ ಅವಶ್ಯಕ ಇರುವಂತಹ ವ್ಯಕ್ತಿಗಳಿಗೆ ದಾನವಾಗಿ ನೀಡುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಹಾಗೊಂದು ಕೆಲಸ ಬಹಳ ನೀವು ಒಳ್ಳೆಯದಾಗಿರುತ್ತದೆ. ಆ ಒಂದು ಒಳ್ಳೆಯ ಕೆಲಸವೆ ನಿಮ್ಮ ಜೀವನದಲ್ಲಿ ನಿಮ್ಮ ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಿ ಬಿಡುತ್ತದೆ.

ನಿಮ್ಮ ಜೀವನದಲ್ಲಿ ನಿಮಗೆ ಯಾವುದೇ ರೀತಿಯ ಕೊರಗು ಗಳಿರಲಿ ಅಥವಾ ಮನೆಯಲ್ಲಿ ಕಿತ್ತ ಶಕ್ತಿ ನಿಮ್ಮ ಮನೆಯ ಸದಸ್ಯರ ನೆಮ್ಮದಿ ಹಾಳು ಮಾಡುತ್ತಿದೆ ಅನ್ನುವುದಾದರೆ ಈ ರೀತಿಯ ಒಂದು ಪರಿಹಾರವನ್ನು ಕೈಗೊಳ್ಳಿ ಇದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಹಾಗೆ ಅನ್ನಪೂರ್ಣೇಶ್ವರಿ ಲಕ್ಷ್ಮೀದೇವಿಯ ಸಹೋದರಿ. ಆದ ಕಾರಣ ನೀವು ಅನ್ನಪೂರ್ಣೇಶ್ವರಿ ದೇವಿಗೆ ಗೌರವವನ್ನು ಸಲ್ಲಿಸಿದರೆ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ನಿಮ್ಮ ಪ್ರತಿಯೊಂದು ಇಷ್ಟಾರ್ಥಗಳನ್ನು ನೆರವೇರಿಸುವ ಒಂದು ವರವನ್ನು ನಿಮಗೆ ನೀಡ್ತಾಳೆ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಆಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡುವ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ