ನೀವೆಲ್ಲರೂ ಎರಡು ಸಾವಿರದ ನಾಲ್ಕು ರಲ್ಲಿ ತಮಿಳುನಾಡಿನಲ್ಲಿ ಆದ ಸುನಾಮಿಯ ಬಗ್ಗೆ ಎಲ್ಲರೂ ತಿಳಿದಿರುತ್ತೀರಿ ಹಾಗೂ ಈ ಸುನಾಮಿಯಿಂದ ತಮಿಳುನಾಡಿಗೆ ಬಹಳಷ್ಟು ನಷ್ಟವೂ ಸಹ ಆಗಿದೆ ಆದರೆ ಇಲ್ಲಿಯ ಒಂದು ದೇವಸ್ಥಾನ ಪ್ರಳಯಕ್ಕೂ ಜಗ್ಗಿಲ್ಲ ಈ ಸುನಾಮಿಯಿಂದ ಆ ದೇವಸ್ಥಾನಕ್ಕೆ ಸ್ವಲ್ಪವೂ ಏನೂ ತೊಂದರೆಯಾಗಿಲ್ಲ . ಇನ್ನು ಈ ದೇವಸ್ಥಾನವು ತಮಿಳುನಾಡಿನ ತಿರುಚೆಂದೂರು ಎಂಬ ಪ್ರದೇಶದಲ್ಲಿದೆ ಈ ದೇವಾಲಯದಲ್ಲಿ ಕಾರ್ತಿಕೇಯ ಅಂದರೆ ಮುರುಗನ್ನನ್ನು ಪೂಜೆ ಮಾಡುತ್ತಾರೆ . ಸುನಾಮಿ ಬಂದು ಎಲ್ಲವೂ ಕೊಚ್ಚಿ ಹೋದರೂ ಈ ದೇವಸ್ಥಾನಕ್ಕೆ ಏನೂ ಆಗಿಲ್ಲ ಅಂದರೆ ನೀವು ಯೋಚನೆ ಮಾಡಬಹುದು ಇಲ್ಲಿ ಬರುವ ಪ್ರವಾಹದ ಅಲೆಗಳ ಪ್ರಮಾಣ ಕಡಿಮೆ ಇರಬಹುದು ಎಂದು ಆದರೆ ಸ್ನೇಹಿತರೇ ಇಲ್ಲಿ ಈ ದೇವಸ್ಥಾನದಲ್ಲಿ ಅಕ್ಕಪಕ್ಕ ಇರುವ ಪ್ರದೇಶಗಳಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗಿದೆ ಆದರೆ ಈ ದೇವಾಲಯಕ್ಕೆ ಮಾತ್ರ ಏನೂ ಆಗಿಲ್ಲ .
ಇದಕ್ಕೆ ಕಾರಣವನ್ನು ನೋಡುವುದಾದರೆ ನಮ್ಮ ಹಿಂದಿನ ಕಾಲದವರು ದೇವಾಲಯ ಕಟ್ಟುವುದಕ್ಕಾಗಿ ಆಯ್ಕೆ ಮಾಡಿರುವ ಸ್ಥಳ ಹೌದು ಸ್ನೇಹಿತರೇ ಈ ಆಯ್ಕೆ ಮಾಡಿರುವ ಸ್ಥಳ ನಮ್ಮ ಹಿಂದಿನ ಕಾಲದವರ ಜಾಣ್ಮೆಗೆ ಕನ್ನಡಿ ಹಿಡಿದಂತೆ ಇದೆ ಹೌದು ಈ ದೇವಾಲಯವನ್ನು ಕಟ್ಟಿರುವ ಸ್ಥಳ ಸಮುದ್ರದ ತೀರದಲ್ಲಿ ಆದರೂ ಈ ದೇವಸ್ಥಾನದ ಬಳಿ ಇರುವ ಸಮುದ್ರದ ಪ್ರದೇಶದ ದಡದಲ್ಲಿ ಜಾಸ್ತಿ ಬಂಡೆಕಲ್ಲುಗಳ ಇವೆ ಆದ್ದರಿಂದ ಸುನಾಮಿ ಬಂದರೂ ಈ ಪ್ರದೇಶಕ್ಕೆ ಅಂದರೆ ಈ ದೇವಾಲಯಕ್ಕೆ ಅಷ್ಟು ಏನೂ ಹಾನಿಯಾಗುವುದಿಲ್ಲ ಎಂದು ಕಾರಣದಿಂದಾಗಿ ಈ ಪ್ರದೇಶದಲ್ಲಿ ದೇವಾಲಯವನ್ನು ಕಟ್ಟಿದ್ದಾರೆ . ಇನ್ನು ಇಲ್ಲಿನ ಜನ ನಂಬಿರುವ ಹಾಗೆ ಒಮ್ಮೆ ಮುರುಗನಿಗೆ ವರುಣರಾಯನ ಮಾತು ಕೊಟ್ಟಿದ್ದರಂತೆ ಅದೇನೆಂದರೆ ನನ್ನಿಂದ ನಿನಗೆ ಯಾವ ತೊಂದರೆಯೂ ಸಹ ಆಗುವುದಿಲ್ಲ ಎಂದು ಆದ್ದರಿಂದ ಸುನಾಮಿ ಬಂದರೂ ಈ ದೇವಾಲಯಕ್ಕೆ ಏನೂ ಆಗಿಲ್ಲ ಎಂದು ಇಲ್ಲಿನ ಜನರು ನಂಬಿದ್ದಾರೆ .
ಹಲವು ರಾಜ ಮನೆತನಗಳು ಈ ದೇವಾಲಯಕ್ಕೆ ಬಂದು ಹೋಗಿರುವ ಉಲ್ಲೇಖಗಳು ಇವೆ ಆದ್ದರಿಂದ ಈ ದೇವಾಲಯವು ಹಲವಾರು ವರ್ಷಗಳ ಹಿಂದಿನ ದೇವಾಲಯವೆಂದು ಇದರಿಂದ ತಿಳಿದು ಬರುತ್ತದೆ .
ಇನ್ನು ಒಮ್ಮೆ ಡಚ್ಚರು ಈ ದೇವಾಲಯದ ಮೇಲೆ ದಾಳಿ ಮಾಡಿ ಇಲ್ಲಿರುವ ದೇವರ ವಿಗ್ರಹವನ್ನು ಎತ್ತಿಕೊಂಡು ಹೋಗುತ್ತಿದ್ದಂತೆ ಆ ಸಮಯದಲ್ಲಿ ಪ್ರಕೃತಿ ವಿಕೋಪಕ್ಕೆ ಹೋಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಯಿತು ಇದರಿಂದ ಹಡಗಿನಲ್ಲಿದ್ದ ಜನರು ಹೆದರಿ ವಿಗ್ರಹವನ್ನು ಸಮುದ್ರಕ್ಕೆ ಎಸೆದ ಮೇಲೆ ಸಮುದ್ರದ ಅಲೆಗಳ ಅಬ್ಬರ ಕಮ್ಮಿಯಾಯಿತು ನಂತರ ಡಚ್ಚರು ಆ ಸ್ಥಳವನ್ನು ಬಿಟ್ಟು ಓಡಿ ಹೋದರು ನಂತರ ಈ ವಿಷಯ ಊರ ಜನರಿಗೆ ತಿಳಿದು ಬಡ ಮಲಿಯಪ್ಪ ಎಂಬವರಿಂದ ಹೊಸ ವಿಗ್ರಹವನ್ನು ಕೆತ್ತನೆ ಮಾಡಿಸಿ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದ್ದರು ಆಗ ಒಂದು ದಿನ ವಡಮಲಿಯಪ್ಪನವರ ಕನಸಿಗೆ ಮೆರುಗನ್ನು ಬಂದು ನಾನು ಸಮುದ್ರದಲ್ಲಿ ಮುಳುಗಿ ಹೋಗಿದ್ದೇನೆ ನಾನು ಇರುವ ಸ್ಥಳದಲ್ಲಿ ನಿಂಬೆಹಣ್ಣು ತೇಲುತ್ತಿದೆ ಎಂದು ಕನಸಿನಲ್ಲಿ ಬಂದು ಹೇಳಿದ್ದರಂತೆ . ಇದನ್ನು ಅರಿತ ಒಡ ಮಲಿಯಪ್ಪನವರ ಕೆಲ ಈಜುಗಾರರನ್ನು ಕರೆದೊಯ್ದು ಸಮುದ್ರದಲ್ಲಿದ್ದ ವಿಗ್ರಹವನ್ನು ಎತ್ತಿಕೊಂಡು ಬಂದರಂತೆ . ನಂತರ ಈ ವಿಗ್ರಹವನ್ನು ಸ್ಥಾಪಿಸಿ ಎಲ್ಲರೂ ದೇವರ ಆಶೀರ್ವಾದವನ್ನು ಪಡೆದುಕೊಂಡರಂತೆ ನೋಡಿದ್ರಲ್ಲ ಸ್ನೇಹಿತರೇ ಮುರುಗನ ಪವಾಡವನ್ನು .
ಕಾಲಕಾಲಕ್ಕೆ ತನ್ನ ಪವಾಡಗಳನ್ನು ತೋರಿಸುತ್ತಾ ಇರುವ ಮುರುಗನ ಆಶೀರ್ವಾದವನ್ನು ನೀವು ಸಹ ಪಡೆದುಕೊಳ್ಳಿ ಇನ್ನು ಈ ದೇವಾಲಯವು ಉತ್ತರದಿಂದ ದಕ್ಷಿಣಕ್ಕೆ ತೊಂಬತ್ತು ಒಂದು ಮೀಟರ್ ಅಗಲವಿದೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಅರುವತ್ತೈದು ಮೀಟರ್ ಮತ್ತು ಈ ಗೋಪುರವು ನಲವತ್ತು ಎರಡು ಮೀಟರ್ ಉದ್ದವಿದೆ ಎಂದು ಹೇಳಲಾಗುತ್ತದೆ ಇನ್ನು ಕನ್ಯಾಕುಮಾರಿಯಿಂದ ಎಪ್ಪತ್ತೈದು ಕಿಲೋಮೀಟರ್ ನಲ್ಲಿ ತಿರುಚೆಂದೂರು ಇದೇ . ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಧನ್ಯವಾದಗಳು ಶುಭ ದಿನ ಶುಭವಾಗಲಿ.
ವಿಡಿಯೋ ಕೆಳಗೆ ಇದೆ..