ಮಾನವ ಶರೀರವು ಒಂದು ಮಹಾ ಅದ್ಬುತ ಸೃಷ್ಟಿ, ಈ ವಿಚಾರವನ್ನು ನಾವು ಸ್ಪಷ್ಟವಾಗಿ ಅರಿತುಕೊಂಡಲ್ಲಿ ನಮಗೆ ವಿಚಿತ್ರ ಎನಿಸುತ್ತದೆ.
ಯುಕ್ತ ವಯಸ್ಸಿನ ಒಬ್ಭ ಮನುಜನ ಶರೀರದಲ್ಲಿ ಒಂದು ಲಕ್ಷ ಕಿಲೋಮೀಟರ್ ಉದ್ದವಿರುವ ರಕ್ತ ನಾಳಗಳು ಇರುತ್ತವೆ.
ನಮ್ಮ ಶರೀರದಲ್ಲಿರುವ ಕೆಂಪು ರಕ್ತ ಕಣಗಳು ೧೨೦ ದಿನಗಳು ಮಾತ್ರವೇ ಜೀವಂತವಾಗಿರುತ್ತವೆ.
ಮನುಜನ ಶರೀರದಲ್ಲಿ ಸುಮಾರು ೨ಮಿಲಿಯನ್ ಶ್ವೇದ ಗ್ರಂಥಿಗಳು ಇರುತ್ತವೆ.
ನಮ್ಮ ಶರೀರದಲ್ಲಿ ೨೦೬ಮೂಳೆಗಳು ೬೫೦ಖಂಡಗಳು ೧೦೦ಕ್ಕೂ ಹೆಚ್ಚು ಕೀಲುಗಳು ಇರುತ್ತವೆ.
೭ವರ್ಷಕ್ಕೊಮ್ಮೆ ಮಾನವನ ಶರೀರದಲ್ಲಿ ಕೆಲವು ಜೀವ ಕಣಗಳು ಬದಲಾವಣೆ ಹೊಂದಿರುತ್ತದೆ ಆದರೆ ಪರಿಣಾಮವಾಗಿ ಮನುಜನ ರೂಪವೂ ಸಹ ಬದಲಾವಣೆಯನ್ನು ಹೊಂದಿರುತ್ತದೆ, ಆ ಬದಲಾವಣೆಯ ಸಕಾರತ್ಮಕ ಬದಲಾವಣೆ ಆಗಬಹುದು ಅಥವಾ ನಕಾರತ್ಮಕ ಬದಲಾವಣೆ ಆಗಬಹುದು.
ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಕಾಮಾಲೆ ರೋಗ ಹಾಗು ರಕ್ತಹೀನತೆಯಿಂದ ಮುಕ್ತಿ ಹೊಂದಲು ಒಂದು ಸಣ್ಣ ಅಡಿಕೆಯನ್ನೀಯು ಹೀಗೆ ಬಳಸಿ.
ಸುಗಂಧಯುಕ್ತ ಅಡಿಕೆಪುಡಿ ಮೆಲ್ಲುವುದರಿಂದ ಬಾಯಿಯಿಂದ ಹೊರ ಹೊಮ್ಮುವ ದುರ್ಗಂಧ ನಾಶವಾಗುವುದು, ಉಸಿರು ಸುವಾಸನೆಯಿಂದ ಕೂಡಿರುವುದು, ರುಚಿಗ್ರಹಣ ಶಕ್ತಿ ಜಾಗೃತ ವಾಗುವುದು ಹಾಗು ಹಲ್ಲಿನ ವಸಡು ಗಟ್ಟಿಯಾಗುವುದು.
ಪ್ರತಿದಿನವೂ ಸ್ವಲ್ಪ ಅಡಿಕೆಪುಡಿಯನ್ನು ಉಪಯೋಗಿಸುತ್ತಿದ್ದಾರೆ ಆಮಶಂಕೆ, ಅತಿಸಾರ, ಶಾಂತವಾಗುವ ಸಂಭವ ಉಂಟು.
ಅಡಿಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ನಿಲ್ಲುವುದು, ಗಂಟಲು ಹುಣ್ಣು ಕಡಿಮೆಯಾಗುವುದು.
ಅಡಿಕೆಯನ್ನು ಅತಿಯಾಗಿ ಬಳಸುವುದರಿಂದ ರಕ್ತಹೀನತೆ ಮತ್ತು ಕಾಮಾಲೆ ರೋಗ ಕಡಿಮೆ ಯಾಗುವುದು.
ಹಲವು ಸಂಶೋಧನೆಯ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು, ರಕ್ತವನ್ನು ಶುದ್ದಿಗೊಳಿಸುತ್ತದೆ.ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ, ಇಸುಬು, ಫಂಗಸ್ ನ ಸೋಂಕುಗಳಲ್ಲಿ, ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣ.
ಆಡಿಕೆಯ ಚೂರ್ಣವನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ವಾಂತಿ ಮತ್ತು ವಾಂತಿ ಬಂದಂತಾಗುವ ಲಕ್ಷಣ ಕಡಿಮೆಯಾಗುತ್ತದೆ.
ಕೆಮ್ಮು ಮತ್ತು ಕಫರೋಗಗಳಲ್ಲಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಕಟ್ಟಿರುವ ಕಫ ಸಡಿಲಗೊಳ್ಳುತ್ತದೆ, ಕೆಮ್ಮು ನಿವಾರಣೆಯಾಗುತ್ತದೆ.
ಅಡಿಕೆಯಲ್ಲಿನ ಅರೆಕೋಲಿನ್ ಎಂಬ ಅಂಶವು ಅತಿಯಾದ ರಕ್ತದೊತ್ತಡ ಹಾಗೂ ಗೊರಕೆಯನ್ನು ನಿಯಂತ್ರಿಸುತ್ತದೆ.