ದೈವಿಕ ಶಕ್ತಿಯಿಂದ ಇರುವ ಅಲೋವೆರಾ ಶ್ರೀಕೃಷ್ಣನ ಬೃಂದಾವನದಲ್ಲಿ ಬೆಳೆದಿತ್ತು ಹಾಗಾದರೆ ಅಲೋವೆರಾ ಗಿಡದ ಬಗ್ಗೆ ನಾವು ತಿಳಿಯೋಣ.ಹಾಯ್ ಸ್ನೇಹಿತರೆ ಪ್ರತಿಯೊಂದು ಮರಗಳಿಗೂ ಗಿಡಗಳಿಗೆ ಅದರದ್ದೇ ಆದ ವಿಶೇಷತೆ ಇರುತ್ತವೆ. ಹಾಗೆಯೇ ಇದರಲ್ಲಿ ಔಷಧೀಯ ಗುಣಗಳಿರುತ್ತವೆ. ಹಾಗಾದರೆ ಅಲೋವೆರಾ ಗಿಡದಿಂದ ಆಗುವ ಉಪಯೋಗಗಳು ಏನು ಎಂದು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಇದು ಲಕ್ಷ್ಮೀನಾರಾಯಣನ ಅನುಷ್ಠಾನ ಮಾಡಿದಂತೆ ಸಮ. ಇದನ್ನು ಎಲ್ಲರೂ ತಮ್ಮ ಮನೆಯ ಮುಖ್ಯದ್ವಾರದ ತಲೆ ಭಾಗದಲ್ಲಿ ಕಟ್ಟುತ್ತಾರೆ ಇದರಿಂದ ನಿಮ್ಮ ಮನೆಗೆ ಯಾವುದೇ ಮಾಟ ಮಂತ್ರಗಳು ಆಗುವುದಿಲ್ಲ.
ನಿಮ್ಮ ಮನೆಯ ಕಷ್ಟ-ಕಾರ್ಪಣ್ಯಗಳೆಲ್ಲ ಇದನ್ನು ಕಟ್ಟುವುದರಿಂದ ದೂರವಾಗುತ್ತದೆ.ಈ ಅಲೋವೆರಾವನ್ನು ಲೋಳೆರಸ ಎಂದು ಸಹ ಕರೆಯುತ್ತಾರೆ. ಇದು ಎಲ್ಲೆಂದರಲ್ಲಿ ಬೆಳೆಯುತ್ತದೆ ಇದಕ್ಕೆ ಯಾರ ಪೋಷಣೆ ಹಾಗೂ ರಕ್ಷಣೆಯ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಆರು ತಿಂಗಳವರೆಗೂ ನೀರು ಇಲ್ಲದೆ ಇರುವ ದೈವಿಕ ಶಕ್ತಿ ಇದೆ. ಬೇರೆ ಗಿಡಗಳೆಲ್ಲ ನೀರನ್ನು ಹಾಕದೆ ಹೋದರೆ ಬೇಗ ಸಾಯುತ್ತವೆ ಆದರೆ ಈ ಗಿಡ ತುಂಬಾ ವಿಶೇಷವಾದ ಗುಣವನ್ನು ಹೊಂದಿದೆ ಏಕೆಂದರೆ ಇದು ದೈವ ಅಶದ ಗಿಡ ಇದನ್ನು ನಾವಾಗೇ ಹಚ್ಚುವುದು ಉತ್ತಮವಲ್ಲ ಆದರೆ ಅದು ತಾನಾಗೆ ಬೆಳೆದರೆ ಒಳ್ಳೆಯದು.
ಈ ಅಲೋವೆರಾ ಗಿಡವನ್ನು ಯಾವ ದಿಕ್ಕಿನಲ್ಲಿ ಅನುಷ್ಠಾನ ಮಾಡಬೇಕು ಎಂದು ನೋಡೋಣ. ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಹಚ್ಚಬೇಕು ಅಥವಾ ಅದಾಗಿಯೇ ಬೆಳೆಯಬೇಕು. ಈಶಾನ್ಯ ದಿಕ್ಕು ದೇವರ ಮೂಲೆಯ ದಿಕ್ಕು ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರು ವಾಸಿಸುತ್ತಾನೆ ಎನ್ನುವ ನಂಬಿಕೆ ಇದೆ. ಈ ದಿಕ್ಕಿಗೆ ನೀವೇನಾದರೂ ಅಲೋವೆರಾ ಗಿಡ ಬೆಳೆಸಿದರೆ ನಿಮ್ಮ ಮನೆಗೆ ಅದೃಷ್ಟವು ಬರುತ್ತದೆ ಹಾಗೆ ಯಾವ ತಂತ್ರ ಮಂತ್ರಗಳು ಶಕ್ತಿ ನಿಮ್ಮ ಮನೆಗೆ ಬೀಳುವುದಿಲ್ಲ. ನೈರುತ್ಯ ದಿಕ್ಕು ಹಾಗೂ ಆಗ್ನೇಯ ದಿಕ್ಕು ಇದಕ್ಕೆ ಸೂಕ್ತವಲ್ಲ.
ಆಗ್ನೇಯ ದಿಕ್ಕಿನಲ್ಲಿ ಅಗ್ನಿಯು ವಾಸವಾಗಿರುತ್ತಾರೆ ಅಲ್ಲಿ ಏನಾದರೂ ನೀವು ಇದನ್ನು ಹಚ್ಚಿದರೆ ಮನೆ ನಾಶ ಆಗಿ ಹೋಗುತ್ತದೆ. ಹಾಗೇನಾದರೂ ಈ ಗಿಡವು ಮನೆಯಲ್ಲಿ ಕಟ್ಟಿದಾಗ ಯಾರ ತೊಂದರೆ ಇಲ್ಲದೆ ತಾನಾಗೆ ಬಾಡಿ ಹೋದರೆ ಮನೆಗೆ ಕೆಟ್ಟದ್ದು ಆಗುವ ಮುನ್ಸೂಚನೆ ಎಂದು ತಿಳಿಯಬೇಕು. ವಾಯುವ್ಯ ದಿಕ್ಕಿನಲ್ಲಿ ನೀರು ಹರಿಯುತ್ತಿರುತ್ತದೆ ಹಾಗಾಗಿ ಅಲೋವೆರಾ ಗಿಡವನ್ನು ಇಲ್ಲಿ ಹಚ್ಚುವುದರಿಂದ ನೀವು ತುಂಬಾ ಅದೃಷ್ಟವನ್ನು ಪಡೆಯುತ್ತೀರಿ. ಈ ಒಂದು ಗಿಡವನ್ನು ಬೇರಿನ ಸಮೇತ ತೆಗೆದುಕೊಂಡು ಮನೆಯ ಮುಖ್ಯದ್ವಾರದ ತಲೆ ಭಾಗಕ್ಕೆ ಕಟ್ಟಬೇಕು.
ಶುಕ್ರವಾರ ಅಥವಾ ಮಂಗಳವಾರ 6 ರಿಂದ 7 ಗಂಟೆಯವರೆಗೆ ಈ ಗಿಡವನ್ನು ಬೇರು ಮೇಲೆ ಮಾಡಿ ಎಲೆಗಳನ್ನು ಕೆಳಗೆ ಮಾಡಿ ಕಟ್ಟಬೇಕು ಹೀಗೆ ಮಾಡುವುದರಿಂದ ಕೃಷ್ಣನ ಅನುಷ್ಠಾನ ನಿಮ್ಮ ಮನೆಗೆ ಆಗುತ್ತದೆ ಹಾಗೆಯೇ ಎಲ್ಲಾ ಅದೃಷ್ಟಗಳು ಸಿಗುತ್ತವೆ ಗ್ರಹದೋಷ ಶನಿದೋಷ ರಾಹುದೋಷಗಳು ಇದ್ದರೆ ಪರಿಹಾರ ಆಗುತ್ತವೆ. ಹಾಗೆಯೇ ಅಲೋವೆರಾದ ರಸವನ್ನು ಶುಕ್ರವಾರ ಲಕ್ಷ್ಮೀ ಅಥವಾ ದುರ್ಗೆಯ ಪೂಜೆ ಮಾಡಿದ ನಂತರ ನೈವೇದ್ಯ ಮಾಡಬೇಕು. ಮರುದಿನ ನೈವೇದ್ಯ ಮಾಡಿದ ರಸವನ್ನು ಮನೆಯ ಜನರೆಲ್ಲಾ ಹಚ್ಚಿಕೊಂಡು ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಹಾಗಿದ್ದರೆ ದೂರ ಆಗುತ್ತದೆ.
ಆರೋಗ್ಯವೂ ಕೂಡ ನಿಮಗೆ ಸಿಗುತ್ತದೆ ನೀವೇನಾದರೂ ದರಿದ್ರರಾಗಿದ್ದರೆ ಇದು ಕೂಡಾ ನಿವಾರಣೆಯಾಗುತ್ತದೆ. ನಿಮ್ಮ ಮನೆ ಸಮೃದ್ಧಿಯಾಗಿರುತ್ತದೆ ಹಾಗಾದರೆ ನೀವು ಕೂಡ ಅಲೋವೆರಾ ಗಿಡದ ಈ ಒಂದು ಪೂಜೆಯನ್ನು ಮಾಡಿ ಅದೃಷ್ಟರಾಗಿ ಜೀವನ ನಡೆಸಿರಿ. ಹಾಗೆ ಇದನ್ನು ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಮಾತ್ರ ಬೆಳೆಸಿರಿ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಮನೆಯಲ್ಲಿ ಶುಭ ಕಾರ್ಯಗಳು ನಿಂತಿದ್ದರೆ ಈ ಗಿಡವನ್ನು ಮುಖ್ಯದ್ವಾರದ ತಲೆ ಭಾಗದಲ್ಲಿ ಕಟ್ಟುವುದರಿಂದ ನೀವು ಸಾಕಷ್ಟು ಲಾಭವನ್ನು ಕಾಣುತ್ತೀರಿ. ಪ್ರತಿ ಶುಕ್ರವಾರ ಲಕ್ಷ್ಮೀದೇವಿಗೆ ಲೋಳೆರಸವನ್ನು ನೈವೇದ್ಯ ಮಾಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬದವರಿಗೂ ತಿಳಿಸಿ ಇಂತಹ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಜೀವನ ನೆಮ್ಮದಿಯಾಗಿ ಇರುತ್ತದೆ. ಧನ್ಯವಾದಗಳು.