Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯ ಮುಖ್ಯ ದ್ವಾರಕ್ಕೆ ಈ ಬೇರನ್ನು ಕಟ್ಟಿ ಆಮೇಲೆ ಈ ರೀತಿ ಬೇಡಿಕೊಂಡರೆ ಸಾಕು ನಿಮ್ಮ ಮನೆಯ ಸಮಸ್ಯೆಗಳು ಏನೇ ಇದ್ದರೂ ಪರಿಹಾರವಾಗುತ್ತವೆ …!!!

ಶ್ರೀ ಮಹಾಲಕ್ಷ್ಮಿಯ ಅನುಗ್ರಹ ಸದಾ ನಿಮ್ಮ ಮನೆಯ ಮೇಲೆ ಇರಬೇಕೆ ಹಾಗಾದರೆ ಈ ಎರಡು ಬೇರುಗಳನ್ನು ಬಳಸಿಕೊಂಡು ನಿಮ್ಮ ಮನೆಯ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ. ಹಾಗೆಯೇ ನಿಮ್ಮ ಮನೆಗೆ ಮಹಾಲಕ್ಷ್ಮಿಯ ಆಶೀರ್ವಾದ ಸದಾ ಇರಲಿ.ಹೌದು ಸ್ನೇಹಿತರೆ, ಎಲ್ಲ ಮನುಷ್ಯರಿಗೂ ಹಾಗೂ ಎಲ್ಲರ ಮನೆಗೂ ಶತ್ರುವಿನ ಕಾಟ ಇದ್ದೇ ಇರುತ್ತದೆ. ಎಲ್ಲರಿಗೂ ಹಿತ ಶತ್ರುಗಳು ಜಾಸ್ತಿ .ಹಾಗಾದರೆ ನಮ್ಮ ಶತ್ರುಗಳು ನಮಗೆ ಮಾಡಿರುವ ಮಾಂತ್ರಿಕ ಶಕ್ತಿಗಳನ್ನು ದೂರ ಓಡಿಸಬೇಕು ಅಂದರೆ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಹಾಗೂ ದುಷ್ಟಶಕ್ತಿಗಳ ದೃಷ್ಟಿಯನ್ನು ನಮ್ಮ ಮನೆಯಿಂದ ಓಡಿಸಬೇಕು ಅಂದಾಗ ಮಾತ್ರ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಯಲ್ಲಿ ಸದಾ ಕಾಲ ನೆಲೆಸುತ್ತಾಳೆ.

ಹಾಗಾದ್ರೆ ಈ ನಕಾರಾತ್ಮಕ ಶಕ್ತಿಗಳನ್ನು ಓಡಿಸುವ ಆ 2 ಬೇರುಗಳು ತುಂಬಾನೇ ಮುಖ್ಯವಾಗಿರುತ್ತವೆ. ಹೌದು ಮಿತ್ರರೇ ಈ ಎರಡು ಬೇರುಗಳಿಂದ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳನ್ನು, ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೆಯೇ ನೀವು ಮಾಡುವ ಕೆಲಸಗಳಿಗೆ ಯಶಸ್ಸು ಎಂಬುದು ದೊರಕುವುದು. ಈಗ ನಾನು ನಿಮಗೆ ಈ ಬೇರುಗಳನ್ನು ಹೇಗೆ ಪೂಜಿಸುವುದು ಹೇಗೆ ಉಪಯೋಗಿಸುವುದು ಎಂಬುದನ್ನು ಹೇಳುತ್ತೇನೆ.ಈ 2 ಬೇರುಗಳನ್ನು ಮನೆಯ ಹೊಸ್ತಿಲಿಗೆ ಕಟ್ಟಬೇಕು. ಏಕೆಂದರೆ ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ಬಾಗಿಲಿಗೆ ತುಂಬಾ ಮಹತ್ವವಿದೆ. ಮನೆಯ ಪ್ರವೇಶ ಬಾಗಿಲಿಗೆ ದ್ವಾರ ಬಾಗಿಲು ಎಂದು ಸಹ ಕರೆಯುತ್ತಾರೆ. ಈ ದ್ವಾರ ಬಾಗಿಲು ಕೇವಲ ಕುಟುಂಬದವರ ಪ್ರವೇಶಕ್ಕೆ ಮಾತ್ರವಲ್ಲದೆ ಶಕ್ತಿಯು ಮನೆ ಒಳಗೆ ಬರಲು ಇರುವ ಮಾರ್ಗ.

ಮನೆಯ ಸುಖ, ಶಾಂತಿ, ಸಂತೋಷ, ನೆಮ್ಮದಿ, ಸಮೃದ್ಧಿ ಎಲ್ಲಾ ದ್ವಾರ ಬಾಗಿಲ ಮೂಲಕ ಮನೆಯ ಒಳಗಡೆ ಬರುತ್ತದೆ. ಮನೆ ಮತ್ತು ಮನೆಯವರ ಏಳು ಬೀಳುಗಳನ್ನು ಮನೆಯ ಹೆಬ್ಬಾಗಿಲು ನಿರ್ಧರಿಸುತ್ತದೆ. ಮುಖ್ಯದ್ವಾರದ ಬಳಿ ಬೆಳಕು ಪ್ರಕಾಶಿಸುವಂತೆ ಬಾಗಿಲನ್ನು ನಿರ್ಮಿಸಬೇಕು.ಹಾಗಾದರೆ ಬೇರುಗಳನ್ನು ಯಾವುದೇ ಒಂದು ಬುದವಾರ ಸಂಜೆ 6 ಗಂಟೆಯಿಂದ 12 ಗಂಟೆ ಒಳಗಡೆ ಈ ಎರಡು ಬೇರುಗಳನ್ನು ಕಟ್ಟಬೇಕು. ಕೆಲ ಗಿಡ-ಮರಗಳಿಗೆ ಅದರದ್ದೇ ಆದ ವಿಶೇಷ ಸ್ಥಾನವಿರುತ್ತದೆ. ಗಿಡಗಳು ದೇವರ ಪ್ರತಿರೂಪವೆಂದು ನಂಬಬಹುದು.

ಅಂತಹ ಸಸ್ಯಗಳಲ್ಲಿ ಬಿಳಿ ಎಕ್ಕದ ಗಿಡ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಹಾಗೆ ವೈಜ್ಞಾನಿಕ ಔಷಧಗಳಲ್ಲಿ ಈ ಗಿಡದ ಬೇರುಗಳನ್ನು ಉಪಯೋಗಿಸುತ್ತಾರೆ. ಈ ಬಿಳಿ ಎಕ್ಕವನ್ನು ಸುಲಭವಾಗಿ ಗುರುತಿಸಬಹುದು. ಇದರ ಎಲೆ ಆಲದ ಮರದ ಎಲೆಗಳಂತೆ ದಪ್ಪವಾಗಿರುತ್ತದೆ . ಹಾಗೆಯೇ ಹೂಗಳು ಚಿಕ್ಕ ಚಿಕ್ಕದಾಗಿರುತ್ತದೆ, ಗೊಂಚಲುಗಳ ಆಕಾರದಲ್ಲಿ ಇರುತ್ತವೆ. ಆದರೆ ಈ ಬಿಳಿ ಎಕ್ಕದ ಗಿಡದ ರಸವು ತುಂಬಾ ವಿ’ಷಕಾರಿಯಾಗಿರುತ್ತದೆ. ಈ ಬಿಳಿ ಎಕ್ಕದ ಗಿಡವನ್ನು ಮಂದಾರ ಪುಷ್ಪ ಎಂದು ಸಹ ಕರೆಯುತ್ತಾರೆ. ಈ ಗಿಡದ ಹೂವು ಗಣೇಶನಿಗೆ ಶಿವನಿಗೆ ಪ್ರಿಯವಾದದ್ದು.ಹಾಗಾದ್ರೆ ಈ ಎರಡು ಬೇರೆಬೇರೆ ಗಿಡಗಳು ಯಾವುವು ಎಂದರೆ  ಮೊದಲನೆಯದಾಗಿ ಬಿಳಿ ಎಕ್ಕದ ಗಿಡದ ಬೇರು ಮತ್ತು ಗರುಡ ಗಿಡದ ಗರುಡ ಬೇರು.

ಈ ಎರಡು ಬೇರುಗಳನ್ನು ಎಲ್ಲರ ಮನೆಗೆ ಅತಿಮುಖ್ಯ ಆಗಿರುವ ಮನೆಯ ಮುಂಬಾಗಿಲಿನ ಹೊಸ್ತಿಲು ಒಳಗಡೆ ಭಾಗದಲ್ಲಿ ಕಟ್ಟಬೇಕು. ಈ ಎರಡು ಬೇರುಗಳನ್ನು ಶುಭ್ರವಾಗಿಸಿ ಮನೆಯಲ್ಲಿ ದೀಪ ದೂಪಗಳಿಂದ ಪೂಜಿಸಿ ಒಂದು ಶುಭ್ರವಾದ ಬಟ್ಟೆಗೆ ಹಾಕಿ ಕೆಂಪು ಹಾಗೂ ಹಳದಿ ದಾರಗಳಿಂದ ಕಟ್ಟಬೇಕು. ಮನೆಯ ಹೊರಗಡೆ ಹೋಗುವಾಗ ಕಟ್ಟಿರುವ ಬೇರುಗಳನ್ನು ನೋಡಿಕೊಂಡು ಹೋಗಬೇಕು. ಹೀಗೆ ಮಾಡುವುದರಿಂದ ನೀವು ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಹಾಗೆ ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಜೀವನ ಸಂತೃಪ್ತಿಯಿಂದ ಕೂಡಿರುತ್ತದೆ.

ಈ ರೀತಿಯಾಗಿ ಪೂಜೆ ಮಾಡಿ ನಿಮ್ಮ ಮನೆಗೆ ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ಪಡೆದುಕೊಳ್ಳಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ