ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ಹರಕೆ ಮಾಡಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ ಎಲ್ಲಾ ಕಷ್ಟಗಳು ಜೀವನದಲ್ಲಿ ಪರಿಹಾರವಾಗುತ್ತದೆ .ಎಲ್ಲಾ ಸಂಕಷ್ಟಗಳು ದೂರವಾಗುವುದು ಖಚಿತ. ಸಾಕ್ಷಾತ್ ಶ್ರೀರಾಮ ಭಕ್ತ ಆಂಜನೇಯನ ಮಹಿಮೆಗಳು ಅಪಾರ. ನಂಬಿ ಬಂದ ಭಕ್ತರನ್ನು ಆಂಜನೇಯ ಎಂದಿಗೂ ಕೈ ಬಿಡುವುದಿಲ್ಲ.ಈ ರೀತಿ ಶಕ್ತಿಶಾಲಿಯಾದ ಆಂಜನೇಯನಿಗೆ ಯಾವ ರೀತಿಯಾದ ಹರಕೆಯನ್ನು ಹೊತ್ತುಕೊಳ್ಳಬೇಕು,
ಆ ಮಾಹಿತಿಯನ್ನು ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿರುತ್ತದೆ. ಸಮಸ್ಯೆಗಳು ಇದ್ದರೆ ಜೀವನ,ಆಗ ಜೀವನಕ್ಕೆ ಒಂದು ಅರ್ಥ ಬರುತ್ತದೆ.ಆದರೆ ಸಮಸ್ಯೆಗಳು ವಿಪರೀತವಾದಾಗ ದೇವರ ಮೋರೆಯನ್ನು ಹೋಗುವುದು ಬಹಳ ಒಳ್ಳೆಯದು. ದೇವರಿಗೆ ಕೆಲವರು ಹರಕೆಯನ್ನು ಮಾಡಿಕೊಂಡು ಕೆಲಸವಾದ ನಂತರ ಹರಕೆಗಳನ್ನು ತೀರಿಸುವ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.ಅದೇ ರೀತಿಯಾಗಿ ನೀವೇನು ಮಾಡಬೇಕು ಅಂದರೆ, ನಿಮಗೆ ಏನಾದರೂ ಸಂಕಷ್ಟಗಳು ಇದ್ದರೆ ಅಂದರೆ ಹಣಕಾಸಿನ ಸಮಸ್ಯೆ,
ಎಷ್ಟೋ ಜನರ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇರುತ್ತದೆ. ಹಣಕಾಸಿನ ಸಮಸ್ಯೆ ಹೋಗಬೇಕು, ಆಂಜನೇಯ ಸ್ವಾಮಿಯ ಅನುಗ್ರಹ ಆಗಬೇಕೆಂದರೆ.ನೀವು ತಪ್ಪದೇ ಆಂಜನೇಯಸ್ವಾಮಿಗೆ ಉದ್ದಿನವಡೆಯ ಹಾರವನ್ನು ಹಾಕಿಸುತ್ತೇನೆ ಎಂದು ಹರಕೆಯನ್ನು ಹೊತ್ತುಕೊಂಡರೆ ಬಹಳ ಒಳ್ಳೆಯದು. ಈ ರೀತಿ ಹರಕೆಯನ್ನು ಹೊತ್ತುಕೊಂಡರೆ ಕೆಲವೇ ವಾರಗಳಲ್ಲಿ ಯಶಸ್ಸನ್ನು ಕಾಣುತ್ತೀರಾ.ಮುಖ್ಯವಾಗಿ ಹಣಕಾಸಿನ ಸಮಸ್ಯೆ ಮತ್ತು ಸಾಲದ ಸಮಸ್ಯೆ ಇರುವವರು ಈ ರೀತಿಯ ಹರಕೆಯನ್ನು ಹೊತ್ತುಕೊಳ್ಳಬೇಕು. ಮನೆಯಲ್ಲಿ ಸುಖ ಶಾಂತಿ ಇರಬೇಕು ಮತ್ತು ಹಣಕಾಸಿನ ಸಮಸ್ಯೆ ಆದಷ್ಟು ಬೇಗ ನಿವಾರಣೆಯಾಗಬೇಕು ಎನ್ನುವವರು ಈ ರೀತಿಯ ಉದ್ದಿನವಡೆಯ ಹಾರವನ್ನು ಹಾಕುತ್ತೇನೆ
ಹರಕೆಯನ್ನು ಇಟ್ಟುಕೊಂಡರೆ ಕೆಲವೇ ಇದರಿಂದ ಮೂರು ವಾರಗಳಲ್ಲಿ ನಿಖರವಾದ ಫಲಿತಾಂಶ ದೊರಕುತ್ತದೆ ಸ್ನೇಹಿತರೆ.ಮೊದಲಿಗೆ ನೀವೇನು ಮಾಡಬೇಕು ಎಂದರೆ ಅರ್ಚಕರಲ್ಲಿ ಒಂದು ವಿನಂತಿಯನ್ನು ಮಾಡಬೇಕು. ಇದು ಒಂದು ಸಂಕಲ್ಪವನ್ನು ಮಾಡಿಸಬೇಕು. ಸಂಕಲ್ಪ ಎನ್ನುವುದು ಬಹಳ ಮುಖ್ಯ.ಸಂಕಲ್ಪ ಮಾಡದೇ ಹರಕೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಅದು ಯಶಸ್ಸನ್ನು ಕೂಡ ಕೊಡುವುದಿಲ್ಲ.ಅದು ಹರಕೆ ಕೂಡ ನೆರವೇರುವುದಿಲ್ಲ. ಆಂಜನೇಯಸ್ವಾಮಿ ಹತ್ತಿರ ಹೋಗಿ ಸಂಕಲ್ಪವನ್ನು ಮಾಡಿಕೊಂಡು ನಂತರ ಹರಕೆಯನ್ನು ಹೊತ್ತುಕೊಳ್ಳಬೇಕು. ಮೊದಲು ಅರ್ಚಕರ ಹತ್ತಿರ ಎಲ್ಲ ವಿಚಾರವನ್ನು ಮಾಡಿಕೊಳ್ಳಬೇಕು.
ಯಾಕೆಂದರೆ ಕೆಲವು ದೇವಸ್ಥಾನಗಳಲ್ಲಿ ಉದ್ದಿನವಡೆಯ ಹಾರವನ್ನು ಅವರೇ ತಯಾರು ಮಾಡಿಕೊಡುತ್ತಾರೆ. ಆದರೆ ಕೆಲವೊಂದು ದೇವಸ್ಥಾನಗಳಲ್ಲಿ ವಡೆಯನ್ನು ಹೊರಗಡೆಯಿಂದ ಅಥವಾ ತಯಾರು ಮಾಡಿಕೊಂಡು ತರಬೇಕಾಗುತ್ತದೆ.ಅದಕ್ಕಾಗಿ ಅರ್ಚಕರ ಹತ್ತಿರ ಒಂದು ಬಾರಿ ವಿಚಾರ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ನೀವು ಆದಷ್ಟು ಬೇಗ ಹೋಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಅದರಲ್ಲಿ ಶನಿವಾರ ಸಂಕಲ್ಪ ಮಾಡಿಕೊಂಡರೆ ತುಂಬಾನೇ ಒಳ್ಳೆಯದಾಗುತ್ತದೆ.ಮಂಗಳವಾರ ದಿನ ಕೂಡ ಸಂಕಲ್ಪವನ್ನು ಮಾಡಿಕೊಳ್ಳಬಹುದು.
ಹರಕೆ ಹೊತ್ತ ನಂತರ ಕೆಲವೇ ವಾರಗಳಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಸಂಕಷ್ಟಗಳು ದೂರವಾಗುತ್ತದೆ ಅದನ್ನು ನೀವು ನೋಡಬಹುದು.ಸಂಕಷ್ಟಗಳು ದೂರವಾದ ನಂತರ ನಿಮ್ಮ ಹರಕೆಯನ್ನು ಆದಷ್ಟು ಬೇಗ ತೀರಿಸಬೇಕು. ಮುಖ್ಯವಾದ ವಿಷಯ ಏನೆಂದರೆ ಆಂಜನೇಯನನ್ನು ಒಲಿಸಿಕೊಳ್ಳಬೇಕೆಂದರೆ ಶ್ರೀರಾಮನ ಪಾದವನ್ನು ಹಿಡಿದುಕೊಳ್ಳಬೇಕು.ಇದು ಹೇಗೆ ಎಂದರೆ ಶ್ರೀರಾಮ ರಾಮವೆಂದು ಶ್ರೀರಾಮನ ಜಪವನ್ನು ಮಾಡಬೇಕು.ಹೀಗೆ ಮಾಡಿದ್ದೇ ಆದಲ್ಲಿ ನಿನ್ನ ಜೀವನದಲ್ಲಿ ಅಥವಾ ಕೆಲಸಕಾರ್ಯಗಳಲ್ಲಿ ಯಶಸ್ಸು ನಿಮಗೆ ದೊರೆಯುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿಕೊಳ್ಳಿ ಮತ್ತು ಲೈಕ್ ಮಾಡಿ.