ನಿಮ್ಮ ಮನೆಯಲ್ಲಿ ಇರುವಂತಹ ಕರ್ಪೂರದಿಂದ ಈ ರೀತಿಯಾದಂತಹ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳಿಗೂ ಒಳ್ಳೆಯ ಪರಿಹಾರ ಸಿಗುತ್ತದೆ !!!!

32

ನಿಮ್ಮ ಮನೆಯಲ್ಲಿ ಒಳ್ಳೆಯದ್ದೇ ನಡೆಯಬೇಕಾ ಒಳ್ಳೆಯದ್ದೆ ಜರುಗಬೇಕ ಹಾಗಾದರೆ ನಾನು ಹೇಳುವಂತಹ ಈ ಪರಿಹಾರವನ್ನು ಮೂರು ವಾರಗಳವರೆಗೂ ಮಾಡಿ ಇದರಿಂದ ಹೇಗೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ .

ಅನ್ನುವುದನ್ನು ನೀವೇ ನೋಡಬಹುದು. ಹೌದು ನಾವು ನಮ್ಮ ಮನೆಗೆ ಒಳ್ಳೆಯದಾಗಿ ಬೇಕಾದರೆ ಮನೆಯಲ್ಲಿಯೇ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ .

ಆ ನೆಮ್ಮದಿ ನೆಲೆಸಬೇಕಾದರೆ ಈ ಕರ್ಪೂರದಿಂದ ಚಿಕ್ಕ ಪರಿಹಾರವನ್ನ ಮಾಡಿ ಬಿಡಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯೇ ಆಗುತ್ತದೆ ನೀವು ಅಂದುಕೊಂಡದ್ದು ಆಗುತ್ತದೆ ನಿಮ್ಮ ಮನೆಯ ಹಿರಿ ಸದಸ್ಯನಿಗೆ ಒಳ್ಳೆಯದಾಗುತ್ತದೆ.

ಪ್ರತಿಯೊಬ್ಬರ ಜೀವನದಲ್ಲಿಯೂ ಅವರು ನಮಗೆ ಒಳ್ಳೆಯದಾಗಬೇಕು ಅಂತಾನೆ ಬಯಸುವುದು, ಆದರೆ ಆ ಒಳ್ಳೆಯದಾಗಬೇಕೆಂದರೆ ಏನು ಮಾಡಬೇಕು ಅನ್ನುವುದು ಅಷ್ಟಾಗಿ ಜನರಿಗೆ ತಿಳಿದಿರುವುದಿಲ್ಲ.

ಈ ಮಾಹಿತಿಯಲ್ಲಿ ನಾನು ನಿಮಗೆ ಮನೆಯಲ್ಲಿ ಹೆಣ್ಣುಮಕ್ಕಳು ಏನು ಮಾಡಬೇಕು ಮನೆಯ ಹಿರಿ ಸದಸ್ಯನಿಗೆ ಒಳಿತಾಗಬೇಕೆಂದು ಯಾವ ಪರಿಹಾರವನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಸುತ್ತೇನೆ .ಇದನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಮಾಡುವುದರಿಂದ ತುಂಬಾನೇ ಪ್ರಯೋಜನವಾಗುತ್ತದೆ.

ಮೊದಲಿಗೆ ರಾತ್ರಿ ಊಟ ಮಾಡಿದ ಬಳಿಕ ಹೆಣ್ಣು ಮಕ್ಕಳು ಮನೆಯಲ್ಲಿರುವ ಎಂಜಿಲು ಪಾತ್ರೆಗಳನ್ನು ತೊಳೆದಿಡಬೇಕು. ಹೌದು ಮನೆಯಲ್ಲಿ ರಾತ್ರಿ ಊಟ ಮಾಡಿದ ನಂತರ ಇರುವ ಪಾತ್ರೆಗಳನ್ನು ಹೆಣ್ಣು ಮಕ್ಕಳು ಸ್ವಚ್ಛ ಮಾಡಿ .

ನಂತರ ಕರ್ಪೂರದಿಂದ ಈ ಒಂದು ಪರಿಹಾರವನ್ನು ಮಾಡಿ ರಾತ್ರಿ ಎಲ್ಲರೂ ಕೂಡ ಮಲಗಿದ ನಂತರ ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು ನಂತರ ಆರು ಲವಂಗ ಆರು ಕರ್ಪೂರವನ್ನು ತೆಗೆದುಕೊಂಡು ಈ ಎರಡು ಪದಾರ್ಥಗಳನ್ನು ಕರ್ಪೂರದ ಸಹಾಯದಿಂದ ಉರಿಸಬೇಕು.

ಈ ರೀತಿ ಮೂರು ವಾರಗಳವರೆಗೂ ಕರ್ಪೂರ ಮತ್ತು ಲವಂಗ ದಿಂದ ಒಂದು ಪರಿಹಾರವನ್ನು ಮನೆಯಲ್ಲಿ ಮಾಡುವುದರಿಂದ ದೊಡ್ಡ ಬದಲಾವಣೆಯಾಗುತ್ತದೆ. ನೀವು ಅಂದುಕೊಂಡದ್ದು ಸಾಧಿಸಬಹುದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಕೂಡಾ ನೆಲೆಸುತ್ತದೆ .

ಹಾಗೂ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶ ಮನೆಯೊಳಗೆ ಆಗುವುದಿಲ್ಲ ಹಾಗೇ ಈ ಲವಂಗ ಮತ್ತು ಕರ್ಪೂರವನ್ನು ಒಟ್ಟಿಗೆ ಸುಡುವುದರಿಂದ ಮನೆಯಲ್ಲಿ ಒಂದು ಶಾಂತಿಯ ವಾತಾವರಣ ನೆಲೆಸಿರುತ್ತದೆ.

ಕರ್ಪೂರದ ಮಹತ್ವ ಪ್ರತಿಯೊಬ್ಬರಿಗೂ ಕೂಡ ತಿಳಿದಿರುತ್ತದೆ ಪೂಜೆಯ ನಂತರ ಕೊನೆಗೆ ಕರ್ಪೂರದ ಆರತಿಯನ್ನು ಬೆಳಗಿದರೆ ಆ ಪೂಜೆಗೆ ಒಂದು ಪರಿಪೂರ್ಣತೆ ಸಿಗುತ್ತದೆ .ಆಗ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗಿ ಮನೆಯಲ್ಲಿರುವ ಸದಸ್ಯರ ಮನಸ್ಸಿನಲ್ಲಿಯೂ ಏನೋ ಒಂದು ಉಲ್ಲಾಸ ಹೆಚ್ಚುತ್ತದೆ

ಆದ ಕಾರಣ ಮನೆಯಲ್ಲಿ ಕರ್ಪೂರವನ್ನು ಬೆಳಗ್ಗೆ ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ನೆಲೆ ಆಗುತ್ತದೆ ಅಂತ ಹೇಳಬಹುದು.

ಹೀಗೆ ಲವಂಗ ಮತ್ತು ಕರ್ಪೂರದ ಸಹಾಯ ದಿಂದ ನಿಮ್ಮ ಮನೆ ಅಲ್ಲಿರುವ ಕಷ್ಟಗಳನ್ನು ಓಡಿಸಿ ಸುಖದ ಸಂತೋಷದ ಜೀವನವನ್ನು ಬಾಳಿರಿ. ಈ ಒಂದು ಪರಿಹಾರವನ್ನು ಮೂರು ವಾರಗಳು ಮಾಡಿ ನಿಮ್ಮ ಮನೆ ಅಲ್ಲಿ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ.

ಈ ಮೇಲೆ ತಿಳಿಸಿದ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಉಪಯುಕ್ತ ಅದಲ್ಲಿ ಇಷ್ಟ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.

LEAVE A REPLY

Please enter your comment!
Please enter your name here